ಶಿರಾಳಕೊಪ್ಪ: ಕಾನೂನಿನ ಭಯವಿಲ್ಲದೆ ಸಮಾಜಕ್ಕೆ ಧಕ್ಕೆಯಾಗುವಂತಹ ರೌಡಿ ಚಟುವಟಿಕೆಗಳನ್ನು ಎಸಗುತ್ತಿದ್ದ ಇಬ್ಬರು ವ್ಯಕ್ತಿಗಳ ಗಡಿಪಾರು.

 ಸುನಿಲ್ ಕುಮಾರ, 54 ವರ್ಷ, ವಾಸ ಗಾಂಧಿ ನಗರ ಶಿರಾಳಕೊಪ್ಪ ಟೌನ್ ಮತ್ತು ಅಬ್ದುಲ್ ಮುನಾಫ್ @ ಸ್ಟಾರ್ ಮುನ್ನಾ, 48 ವರ್ಷ, ವಾಸ ಹುಸೇನ್ ರಸ್ತೆ, ಹಳ್ಳೂರು ಕೇರಿ, ಶಿರಾಳಕೊಪ್ಪ ಟೌನ್ ಇವರುಗಳು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಓಸಿ/ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿ ಇದ್ದು, ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿ ಸಾರ್ವಜನಿಕ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವಿದ್ದು, ಸದರಿ ಕೃತ್ಯಗಳನ್ನು ಯಾವುದೇ ಕಾನೂನಿನ ಭಯವಿಲ್ಲದೆ ಮುಂದುವರೆಸಿಕೊಂಡು ಬಂದಿರುತ್ತಾರೆ.

ಸುನೀಲ್ ಕುಮಾರ್ ಈತನ ವಿರುದ್ದ ಒಟ್ಟು 08 ಪ್ರಕರಣಗಳು ಮತ್ತು ಅಬ್ದುಲ್ ಮುನಾಫ್@ಮುನ್ನಾ ಸ್ಟಾರ್ ಮುನ್ನಾ ಈತನ ವಿರುದ್ದ ಒಟ್ಟು 10 ಪ್ರಕರಣಗಳು ದಾಖಲಾಗಿದ್ದರೂ ಸಹಾ ಇವರುಗಳ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ಮುಂದುವರೆಸಿಕೊಂಡು ಬಂದಿರುವುದರಿಂದ, ಕಾನೂನು ಬಾಹೊರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಸುನೀಲ್ ಕುಮಾರ್ ಮತ್ತು ಅಬ್ದುಲ್ ಮುನಾಪ್@ಮುನ್ನಾ@ಸ್ಟಾರ್ ಮುನ್ನಾ ರವರುಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ಠಾಣೆ ರವರು ನೀಡಿದ ವರದಿಯ ಮೇರೆಗೆ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳು, ಸಾಗರ ಉಪ ವಿಭಾಗ ರವರು ದಿನಾಂಕ 07/03/2023 ರೀಮ್ದ ದಿನಾಂಕ 07/09/2023 ವರೆಗೆ ಆರು ತಿಂಗಳ ಅವಧಿಗೆ ಸುನೀಲ್ ಕುಮಾರನನ್ನು ಗದಗ ಜಿಲ್ಲೆಗೆ ಮತ್ತು ಅಬ್ದುಲ್ ಮುನಾಫ್@ಮುನ್ನಾ@ಸ್ಟಾರ್ ಮುನ್ನಾ ನನ್ನು ವಿಜಯಪುರ ಜಿಲ್ಲೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ.




Post a Comment

Previous Post Next Post