ಶಿವಮೊಗ್ಗ: ಇಂದಿರಾ ಕ್ಯಾಟಿನ್ ಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ; ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ತೀವ್ರ ಆಕ್ರೋಶ ವ್ಯಕ್ತ

 ಶಿವಮೊಗ್ಗ ಮಹಾನಗರ ಪಾಲಿಕೆ ಇಂದಿರಾ ಕ್ಯಾಂಟಿನ್ ಗಳ ನಿರ್ವಹಣೆಯನ್ನು ಕಡೆಗಣಿಸುತ್ತಾ ಕ್ಯಾಂಟೀನ್ ಮುಚ್ಚುವ ಹುನ್ನಾರ ನಡೆಸುತ್ತಿರುವುದನ್ನು ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸುತ್ತಿದೆ.


ಯಾವುದೇ ವ್ಯಕ್ತಿ ಹಸಿವಿನಿಂದ ನರಳಬಾರದು, ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್ ಯೋಜನೆ ರೂಪಿಸಿ ಅದಕ್ಕೆ ಚಾಲನೆ ನೀಡಿದ್ದರು. ಇದರಿಂದಾಗಿ ಲಕ್ಷಾಂತರ ಮಂದಿಗೆ ನಿತ್ಯ ಕೇವಲ 5 ರೂ ಗೆ ತಿಂಡಿ, 10 ರೂ ಗೆ ಊಟ ದೊರೆಯುತ್ತಿತ್ತು. ಸಿದ್ದರಾಮಯ್ಯನವರ ದೂರದೃಷ್ಠಿಯ ಯೋಜನೆಯಿಂದಾಗಿ ಲಕ್ಷಾಂತರ ಮಂದಿ ಹಸಿವಿನಿಂದ ಬಳಲುವುದು ನಿಂತಿತ್ತು. ಇಡೀ ದೇಶವು ಕೋವಿಡ್ ಸಂಕಷ್ಟಕ್ಕೊಳಗಾದ ಸಂದರ್ಭದಲ್ಲಿ ನಿರ್ಗತಿಕರಿಗೆ, ಬಡವರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿತ್ತು. ಹಸಿವಿನ ಬೆಲೆ ಅಮದು ಎಲ್ಲರಿಗೂ ಗೊತ್ತಾಗಿತ್ತು. ಯಾರೊಬ್ಬರೂ ಹಸಿವಿನಿಂದಿರಬಾರದೆಂಬ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿದ್ದ ಸಿದ್ದರಾಮಯ್ಯ ನವರು " ಅನ್ನರಾಮಯ್ಯ" ಎನಿಸಿದ್ದರು. 

   ಆದರೆ ಬಡವರ ವಿರೋಡಿಯಾದ ಬಿಜೆಪಿ ತನ್ನ ನೀತಿಯಿಂದಾಗಿ ಇಂದಿರಾ ಕ್ಯಾಟೀನ್ ಗಳಿಗೆ ಮೂಲ ಸೌಕರ್ಯಗಳನ್ನು ಕಡಿರಗಿಳಿಸುತ್ತಾ ಬಂದಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಮೂಲಭೂತ ಸೌಕರ್ಯಗಳನ್ನು ಕಡೆಗಣಿಸುತ್ತಾ ಬರಲಾಗುತ್ತಿದೆ. ನಗರದಲ್ಲಿ ನಾಲ್ಕು ಇಂದಿರಾ ಕ್ಯಾಂಟನ್ ಗಳಿದ್ದು, ಇಲ್ಲಿ ಹಿಂದಿನಂತೆ ಗುಣಮಟ್ಟದ ಆಹಾರ ಒದಗಿಸುತ್ತಿಲ್ಲ. ಶುಚಿತ್ವವಂತೂ ಇಲ್ಲವೆ ಇಲ್ಲ ಎನ್ನುವಂತಾಗಿದೆ. ಗುಣಮಟ್ಟದ ಆಹಾರ ಒದಗಿಸಿದರೆ ಶುಚಿತ್ವವನ್ನು ಕದೆಗಣಿಸಿ ನಾಗರಿಕರು ಇಂದಿರಾ ಕ್ಯಾಂಟಿನ್ ಕಡೆ ತಲೆ ಹಾಕದಂತೆ ಮಾಡಲಾಗುತ್ತಿದೆ.

ಇಂದಿರಾ ಕ್ಯಾಂಟಿನ್ ಗೆ ಆಹಾರ ಪೂರೈಸುವುದು ಮತ್ತು ನಿರ್ವಹಿಸುವುದು ಮಹಾನಗರ ಪಾಲಿಕೆ ಕೆಲಸವಾಗಿದ್ದು, ಪಾಲಿಕೆಯಲ್ಲಿರುವ ಬಿಜೆಪಿ ಆಡಳಿತ ಇಂದಿರಾ ಕ್ಯಾಂಟಿನ್ ನಲ್ಲಿ ಕಳಪೆ ಆಹಾರ ಪೂರೈಸಿ ಶುಚಿತ್ವ ಕಡೆಗಣಿಸುವ ಮೂಲಕ ಅದನ್ನು ಮುಚ್ಚುವ ಕೆಲಸಕ್ಕೆ ಕೈ ಹಾಕಿದೆ. ಬಡಾವರ ಅನ್ನ ಕಸಿದುಕೊಳ್ಳುತ್ತಿರುವ ಬಿಜೆಪಿ ದುರಾಡಳಿತವನ್ನು ನಾವು ಖಂಡಿಸುತ್ತಿದ್ದು, ಕೂಡಲೇ ಪಾಲಿಕೆ ಆಡಳಿತ ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟಿನ್ ಗಳಿಗೆ ಮೂಲ ಸೌಕರ್ಯಗಳನ್ನು ಶುಚಿತ್ವವಾಗಿಟ್ಟುಕೊಂಡು ಗುಣಮಟ್ಟದ ಆಹಾರವನ್ನು ನಾಗರಿಕರಿಗೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭತನೆ ನಡೆಸಲಾಗುವುದು ಎಂದು ಎಚ್ಚರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ರಮೇಶ್, ವಿಶ್ವನಾಥ್ ಕಾಶಿ, ಮಹಾನಗರ ಪಾಲಿಕೆ ಸದಸ್ಯರಾದ ಯೋಗೇಶ್, ಎನ್ ಎಸ್ ಯು ಐ ಅಧ್ಯಕ್ಷರಾದ ವಿಜಯ್, ಕುಮಾರಸ್ವಾಮಿ, ಶೇಷಾದ್ರಿ, ಅರ್ಚನಾ, ಸುವರ್ಣ  ನಾಗರಾಜ್, ನೂರಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Post a Comment

Previous Post Next Post