ಸೊರಬ: 20 ಎಕರೆಗೂ ಅಧಿಕ ರೈತರ ಬಗರ್ ಹುಕುಂ ಜಮೀನುಗಳಲ್ಲಿ ಅಡಿಕೆ ಮರ , ಬೆಳೆಗಳನ್ನು ನಾಶಪಡಿಸಿದ ಅರಣ್ಯ ಅಧಿಕಾರಿಗಳು: ಸ್ಥಳಕ್ಕೆ ಭೇಟಿ ನೀಡಿ ಸಹಾಯ ಮಾಡುವ ಭರವಸೆ ನೀಡಿದ ಶ್ರೀ ಗೋಪಾಲ ಕೃಷ್ಣ ಬೇಳೂರುರವರು.

 ಸೊರಬ ತಾಲೂಕಿನ ಗೆಂಡ್ಲ ಗ್ರಾಮ ಪಂಚಾಯಿತಿ ತಾಳಗೊಪ್ಪ ಗ್ರಾಮದಲ್ಲಿ ಸರ್ವೇ ನಂ 20 ರಲ್ಲಿ ಸುಮಾರು 20 ಎಕರೆಗೂ ಅಧಿಕ ರೈತರ ಬಗರ್ ಹುಕುಂ ಜಮೀನುಗಳಲ್ಲಿ ಅಡಿಕೆ ಮರ ಹಾಗೂ ಇನ್ನಿತರ ಬೆಳೆಗಳನ್ನು ಅರಣ್ಯ ಅಧಿಕಾರಿಗಳು ಸಂಪೂರ್ಣ ನಾಶಪಡಿಸಿ ತೆರವುಗೊಳಿಸಿ ಅಲ್ಲಿನ ರೈತರನ್ನ್ನು ಒಕ್ಕಲೆಬ್ಬಿಸಿದ್ದಾರೆ. ಇಂದು ಸ್ಥಳಕ್ಕೆ ಶ್ರೀ ಗೋಪಾಲ ಕೃಷ್ಣ ಬೇಳುರುರವರು ಪಕ್ಷದ ಮುಖಂಡರು ಹಾಗೂ ಸ್ಥಳೀಯ ಮಖಂಡರೊಂದಿಗೆ ಭೇಟಿ ನೀಡಿ ರೈತ ಮಹಿಳೆರಾದ ವಿನೋದಮ್ಮ ಹಾಗೂ ರೇಣುಕಮ್ಮ ಇವರ ದುಃಖ ಆಲಿಸಿ ಮುಂದಿನ ದಿನಗಳಲ್ಲಿ ಸಹಾಯ ಮಾಡುವ ಭರವಸೆ ನೀಡಿ ಧೈರ್ಯ ತುಂಬಿದರು.



Post a Comment

Previous Post Next Post