ಸಾಗರ: ಸಾಗರದಲ್ಲಿ ಕರ್ನಾಟಕ ರಾಜ್ಯ ಚುನಾವಣೆ-2023 ಹಿನ್ನಲೆ ಕಾರಣ ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು.

 ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023 ಹಿನ್ನಲೆಯಲ್ಲಿ, ಈ ದಿನ ದಿನಾಂಕ 05-04-2023 ರಂದು ಸಂಜೆ ಶ್ರೀ ರೋಹನ್ ಜಗದೀಶ್, ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಸಾಗರ ಉಪ ವಿಭಾಗ ಮತ್ತು ಶ್ರೀ ಮಸ್ಕೆ ಹರ್ಷ ಗೌತಮ್, ಅಸಿಸ್ಟೆಂಟ್ ಕಮಾಂಡೆಂಟ್, ಸಿಆರ್. ಪಿಎಫ್, ರವರ ನೇತೃತ್ವದಲ್ಲಿ ರೂಟ್ ಮಾರ್ಚ್ (ಪಥಸಂಚಲನವನ್ನು) ಹಮ್ಮಿಕೊಂಡಿದ್ದು, ಸದರಿ ಪಥಸಂಚಲನವನ್ನು ಸಾಗರ ಉಪ ವಿಭಾಗ ಕಛೇರಿಯಿಂದ ಫ್ರಾರಂಭಿಸಿ ಸಾಗರ ಟೌನ್ ಹಳೆ ಬಸ್ ನಿಲ್ದಾಣದ ಮುಖಾಂತರ ಎ.ಸಿ ಕಛೆರಿ, ಪೋಸ್ಟ್ ಆಫೀಸ್, ಹಳೆ ಬಸ್ ನಿಲ್ದಾಣ, ಎಕ್ಸ್ ಸರ್ಕಲ್ ಮಾರ್ಗವಾಗಿ ಎಸ್ .ಎನ್ ಸರ್ಕಲ್ ಗೆ ಬಂದು ಮುಕ್ತಾಯ ಮಾಡಲಾಗಿರುತ್ತದೆ.


 

ಸದರಿ ರೂಟ್ ಮಾರ್ಚ್ ನಲ್ಲಿ ಶ್ರೀ ಸೀತಾರಾಂ, ಪಿ.ಐ  ಸಾಗರ ಟೌನ್ ಪೊಲೀಸ್ ಠಾಣೆ, ಸಿಆರ್ ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಯ ಅಧಿಕಾರಿ ಮತ್ತು ಸಿಬ್ಬಂಧಿಗಳು, ಸಾಗರ ಉಪ ವಿಭಾಗದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಭಾಗವಹಿಸಿದ್ದರು.


Post a Comment

Previous Post Next Post