ಶಿವಮೊಗ್ಗ : ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರಜಾಪ್ರಭುತ್ವವನ್ನು ಪರಿಚಯಿಸುವಂತಹ ಕಾರ್ಯ ಶ್ಲಾಘನೀಯ ಎಂದು ಪತ್ರಕರ್ತ ಜಿ.ಸಿ.ಸೋಮಶೇಖರ್ ಹೇಳಿದರು.

 ನಗರದ ೧೦೦ ಅಡಿ ರಸ್ತೆಯಲ್ಲಿರುವ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ನಡೆದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘ ಮತ್ತು ಇಂಟರ್‍ಯಾಕ್ಟ್ ಕ್ಲಬ್ ನ ಮುಕ್ತಾಯ ಸಮಾರಂಭ ಉದ್ಘಾಟಿಸಿ ಮಾತನಾಡಿದೆರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ನಾಯಕತ್ವದ ಗುಣ ಇದ್ದೇ ಇರುತ್ತದೆ , ಅದನ್ನು ಹೊರ ತೆಗೆಯುವಂತಹ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು.


ಪಠ್ಯ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆಗಳೂ ಕೂಡ ಅಷ್ಟೇ ಮುಖ್ಯವಾಗಿದೆ.  ಪಠ್ಯದ ಜೊತೆಯಲ್ಲಿ   ಪಠ್ಯೇತರ ಚಟುವಟಿಕೆಗಲ್ಲಿಯೂ ಸಹ ಅಸಕ್ತಿಯನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳಾದ  ನೀವುಗಳು ಜೀವನದಲ್ಲಿ  ಯಶಸ್ಸನ್ನು ಸಾಽಸಲು ಸಾಧ್ಯವೆಂದು ಹೇಳಿದರು.

ಪ್ರತಿಯೊಬ್ಬ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು  ಒತ್ತನ್ನು ನೀಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ .ಶಿಕ್ಷಕರು ಸಹ ತಮ್ಮ ವಿದ್ಯಾರ್ಥಿಗಳ -ಲಿತಾಂಶಕ್ಕಾಗಿ ಶ್ರಮಿಸುತ್ತಿದ್ದು , ಇದರ ಪರಿಣಾಮವಾಗಿಯೇ ಉತ್ತಮ -ಲಿತಾಂಶ ಬರಲು ಸಾಧ್ಯವಾಗುತ್ತಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತಮ್ಮ ಶಾಲೆ, ತಮ್ಮ ಊರು, ಜಿಲ್ಲೆ , ರಾಜ್ಯ ಹಾಗೂ ರಾಷ್ಟ್ರದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು, ಈ ನಿಟ್ಟಿನಲ್ಲಿ  ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದರು. 

ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಶ್ರೀನಿಽ ಎಜುಕೇಷನ್ ಸೊಸೈಟಿಯ ಆಂತರಿಕ ಲೆಕ್ಕ ಪರಿಶೋಧಕ ಕೊಳಗಿ ಡಿ ವಾಸಪ್ಪಗೌಡ ಮಾತನಾಡಿ, ಈ ವಿದ್ಯಾರ್ಥಿಗಳಿಗೆ ವಿeನದ ವಿಷಯದ ಬಗ್ಗೆ ಆಸಕ್ತಿಯನ್ನು ಮೂಡಿಸಬೇಕು ಎಂದರು. ವಿದ್ಯಾರ್ಥಿಗಳ eನ ಅಭಿವೃದ್ದಿಯಾಗುತ್ತದೆ. ಮಾನವನ ವಿಕಾಸದಿಂದ ಅಂತರಿಕ್ಷ ಯಾನದ ವರೆಗೆ ಇಂದು ವಿeನ ಬೆಳೆದಿದೆ ಇದನ್ನು ತಿಳಿಸುವಂತಹ ಕಾರ್ಯವನ್ನು ಶಿಕ್ಷಕ ಸಮೂಹ ಮಾಡಬೇಕು ಎಂದರು.

ರೋಟರಿ ಮಾಜಿ ಗವರ್ನರ್ ವಿಜಯಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಅಸಕ್ತಿ ಕಡಿಮೆಯಾಗುತ್ತಿದೆ. ಕ್ರೀಡೆಯಲ್ಲಿ ಹೆಚ್ಚು ಅಸಕ್ತಿಯನ್ನು ಬೆಳೆಸಿಕೊಳ್ಳಬೇಕು, ಅದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಬೆಳೆಸುತ್ತದೆ. ಪಾಠ ಪ್ರವಚನಗಳಷ್ಟೇ ಕ್ರೀಡೆಯೂ  ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಶ್ರೀನಿಽ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಟಿಡಿಆರ್ ಶ್ರೀಕಂಠಯ್ಯ, ಇನ್ನರ್ ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಶಬರಿ ಕಡಿದಾಳ್, ರೋಟರಿ ಮಾಜಿ ಆಧ್ಯಕ್ಷ  ಗಣೇಶ್ , ಶಾಲೆಯ ಆಡಳಿತಾಽಕಾರಿ ಟಿ.ಪಿ.ನಾಗರಾಜ್, ಬಿಂದು ವಿಜಯಕುಮಾರ್  ಮುಂತಾದವರಿದ್ದರು.

Post a Comment

Previous Post Next Post