ನಾವು ಹಿಂದು ರಾಷ್ಟ್ರ ಮಾಡಿಯೇ ತೀರ್ತೇವೆ, ಯಾವ ಕಾಂಗ್ರೆಸ್ ನ ತಾಕತ್ ತಡೀಲಿ ನೋಡೋಣ: ಮುತಾಲಿಕ್ ವಿವಾದಾತ್ಮಕ ಹೇಳಿಕೆ

 ರಾಮಜನ್ಮಭೂಮಿ ಹೋರಾಟಕ್ಕೆ ಸಂಬಂಧಿಸಲ್ಪಟ್ಟಿರುವ ಶ್ರೀಕಾಂತ್ ಪೂಜಾರಿ ನಿವಾಸಕ್ಕೆ ಪ್ರಮೋದ್ ಮುತಾಲಿಕ್ ಭೇಟಿ ಅವರು ಕುಟುಂಬಸ್ಥರಿಗೆ ಸಮಾಧಾನ ಹೇಳಿದ ಬಳಿಕ ಅವರು ಸುದ್ದಿಗಾರೊಂದಿಗೆ ಮಾತನಾಡಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಮಗ ಅಂತಾ ಯತಿಂದ್ರ ಅವರ ಹೆಸರು ಬಂದಿದೆ. ಅಪ್ಪನ ಲುಂಗಿ ಹಿಡಕೊಂಡು ಬಂದವರು ಇವರು ಎಂದು ಮೂದಲಿಸಿದರು.

ರಾಮಜನ್ಮಭೂಮಿ ಹೋರಾಟದಲ್ಲಿ ಶ್ರೀಕಾಂತ್ ಪೂಜಾರಿ ಭಾಗಿಯಾಗಿದ್ದರು. ಆದರೆ ಅವರ ಕುರಿತು ಇಲ್ಲ ಸಲದ ಆರೋಪ ಮಾಡುತ್ತಿದ್ದಾರೆ. ದೊಂಬಿ ಗಲಿಭೆ ಪ್ರಕರಣ ದಾಖಲಾಗಿದ್ದವು ಎಂದು ಹೇಳುತ್ತಿದ್ದಾರೆ. ಅದು ಸುಳ್ಳು . ರಾಮಭಕ್ತ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಈ ರೀತಿಯಾಗಿ ಬಂಧನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಅಬ್ಬಯ್ಯನೋ ಅಬ್ದುಲ್ಲಾನೋ
ಇಧೇ ವೇಳೆ ಶಾಸಕ ಪ್ರಸಾದ್ ಅಬ್ಬಯ್ಯ ಅವರನ್ನು ತರಾಟೆಗೆ ತೆೆಗೆದುಕೊಂಡ ಮುತಾಲಿಕ್, ಆತ ದುಡಿಯುವವನು. ಬಿಡುಗಡೆ ಆಗುತ್ತೋ ಇಲ್ವಿಇಲ್ವೋ ಅಂತಾ ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ್ ಸೇನೆ ಖಂಡಿಸುತ್ತದೆ. ಸಿಎಂ, ಗೃಹ ಮಂತ್ರಿ ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸ್ತಿದ್ದಾರೆ. ಅಬ್ಬಯ್ಯ ನೋ ಅಬ್ದುಲ್ಲಾ ನೋ ಗೊತ್ತಿಲ್ಲ. ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೊಂದು ಹಿಂದು ವಿರೋಧ ಸರ್ಕಾರ ಆಗಿದೆ‌. ಶ್ರೀಕಾಂತ ಪೂಜಾರಿ ಮೇಲೆ ಇಲ್ಲ ಸಲ್ಲದ ಪ್ರಕರಣ ದಾಖಲು ಮಾಡಲಾಗಿದೆ. ಆದ್ದರಿಂದ ಇದೊಂದು ವ್ಯವಸ್ಥಿತ ಪಿತೂರಿ ಆಗಿದೆ. ಒಬ್ಬ ದೇಶಭಕ್ತ ಆಗಿದ್ದು 31 ವರ್ಷದ ಹಳೆ‌ ಪ್ರಕರಣವನ್ನು ಕೆದಕಿ ಈಗ ಆತನ ಬಂಧನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ಕೇಸ್ ಗಳಲ್ಲೂ ಆತ ನಿರ್ದೋಷಿಯಾಗಿ ಹೊರ ಬಂದಿದ್ದಾರೆ. 92 ನಂತರ 13 ಕೇಸ್ ಗಳು ಆಗಿವೆ. ಕೋರ್ಟ್ ನೀರ್ದೋಷಿ ಎಂದು ಬಿಡುಗಡೆ ಮಾಡಿದೆ. ಇಂತಹ ದಾರಿ ತಪ್ಪಿಸೋ ಕೆಲಸ ಮಾಡಬಾರದು. ನನ್ನ ಮೇಲೆ 110 ಕೇಸ್ ಇವೆ, ನನ್ನನ್ನು ಗಲ್ಲಿಗೆ ಏರಿಸಬೇಕಿತ್ತು, ಹಾಗಾದ್ರೆ ನಾನು ಕೂಡ ಗೂಂಡಾನಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಿಂದ ವ್ಯವಸ್ಥಿತವಾಗಿ ಸುಳ್ಳು ಕೇಸ್


ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕಿ ಭ್ರಷ್ಟಾಚಾರ ಮಾಡ್ತಿದೆ. ಬೇರೆಯವರು ದುಡ್ಡು ಕೊಟ್ಟಿದ್ದು ಅದಕ್ಕೆ ಬಂಧನ ಮಾಡಿಲ್ಲ, ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಬಂಧನ ಮಾಡಿದ್ದಾರೆ. ದೊಂಬಿ ಕೇಸ್ ಅಂತಾ ಹಾಕಿದ್ದಾರೆ. 13 ಜನ ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದಾರೆ. ಯಾರ್ಯಾರನ್ನೋ ಹೀಡಿಯೋದು ಈ ಕೇಸ್ ನಲ್ಲಿ ಫಿಟ್ ಮಾಡೋದು ಎಂದು ಆರೋಪಿಸಿದರು.

ಅಧಿಕಾರಿಗಳು ಆಡಳಿತ ಸರ್ಕಾರದ ಮಾತು ಕೇಳ್ತಾರೆ..31 ವರ್ಷದ ನಂತರ ಕೇಸ್ ರೀ ಓಪನ್ ಮಾಡೋಕೆ ಸಿದ್ದರಾಮಯ್ಯ ಅವರೇ ಹೇಳಿರ್ತಾರೆ. ನನಗೆ ಹಿಂದುತ್ವ ಆಗೋದಿಲ್ಲ ಎಂದು ಸಿದ್ದರಾಮಯ್ಯ ಅವರೇ ಅಂದಿದ್ದಾರೆ ಎಂದು ದೂರಿದರು.

ದೇಶ ರಾಮಮಯ ಆಗಿರೋದಿಕ್ಕೆ ಹೊಟ್ಟೆ ಉರಿ
ಯಾವ ಆಧಾರದ ಮೇಲೆ ದೊಂಬಿ ಕೇಸ್ ಅಂತಾರೆ. ಇಡೀ ದೇಶ ರಾಮಮಯ ಆಗಿದೆ ಅದಕ್ಕೆ ಹೊಟ್ಟೆ ಊರಿ ಆಗಿದೆ. ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಅವರ ಮೇಲೆ ರೌಡಿ ಶೀಟರ್ ಇಲ್ಲ ಮುಖ್ಯಮಂತ್ರಿಗಳೇ, ಆತ ಅಪರಾಧಿ ಅಲ್ಲ ಆರೋಪಿ. ಕೋರ್ಟ್ ಯಾವುದೇ ಕೇಸ್ ನಲ್ಲೂ ಅಪರಾಧಿ ಅಂದಿಲ್ಲ. ನಿಮ್ಮ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೇಸ್ ಗೆ ಸಂಬಂಧ ಪಟ್ಟಂತೆ ಪೂಜಾರಿ ಅವರನ್ನು ಜೈಲಿಗೆ ಹೋಗಿ ಭೇಟಿ ಕೊಡ್ತೀನಿ. ಕೋರ್ಟ್ ಪ್ರೊಸೆಸ್ ಇದೆ. ಯಾವ ಸರ್ಕಾರನ್ನು ಹಿಂಪಡೆಯಲಾಗಲ್ಲ. ಅವರಿಗೆ ಜಾಮೀನು ಸಿಕ್ಕ ನಂತರ ರದ್ದು ಮಾಡಲು ಮನವಿ ಮಾಡ್ತೆವೆ ಎಂದರು.

ಇನ್ನು ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಗೋಧ್ರಾ ಮಾದರಿ ಯಲ್ಲಿ ದಾಂಧಲೆ ಆಗುತ್ತದೆ ಎಂದು ಹೇಳುತ್ತಾ ಇದ್ದಾರೆ. ಅವರ ವಿಚಾರ ಏನು? ಗೋದ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್ ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡ್ತಿದ್ರಾ? ಅಥವಾ ನೀವೇನಾದ್ರೂ ಪ್ಲ್ಯಾನ್ ಮಾಡ್ತಿದ್ದೀರಾ ಗಲಭೆ ಎಬಿಸಲು? ಮೊದಲು ಸರಿಯಾಗಿ ತಿಳಿದುಕೊಂಡು ‌ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Post a Comment

Previous Post Next Post