ಮಲ್ಲನ ಕೊಲೆ ಪ್ರಕರಣ | ನಾಲ್ವರು ಅರೆಸ್ಟ್ ! | SP ಮಿಥುನ್ ಕುಮಾರ್ ಹೇಳಿದ್ದೇನು?

 ಶಿವಮೊಗ್ಗ ನಗರದ ಗುಡ್ಡೆ ಕಲ್​ ದೇವಸ್ಥಾನದ ಸಮೀಪ, ಚಿಕ್ಕಲ್​ನಲ್ಲಿ ನಡೆದ ಮಲ್ಲೇಶ್ ಅಲಿಯಾಸ್ ಮಲ್ಲಿ ಅಲಿಯಾಸ್ ಮಲ್ಲನ ಕೊಲೆ ಪ್ರಕರಣ ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್  ಪ್ರತಿಕ್ರಿಯಿಸಿದ್ದಾರೆ. 


ನಿನ್ನೆ ಚಿಕ್ಕಲ್​ನಲ್ಲಿ ನಡೆದ ಘಟನೆ ಸಂಬಂಧ ಈಗಾಗಲೇ ನಾಲ್ವರನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಏಳು ಜನರ ದುಷ್ಕರ್ಮಿಗಳ ತಂಡ ಘಟನೆಯಲ್ಲಿ ಪಾಲ್ಗೊಂಡಿದ್ದು, ಈ ಸಂಬಂಧ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ. 

ಮಾಧ್ಯಮಗಳಿಗೆ ಪ್ರಕರಣ ಕುರಿತಾಗಿ ಮಾಹಿತಿ ನೀಡಿರುವ ಮಿಥುನ್ ಕುಮಾರ್ ಐಪಿಎಸ್​ ಪ್ರಕರಣದಲ್ಲಿ  ಆರೋಪಿಗಳು ಹಾಗೂ ಕೊಲೆಯಾದ ವ್ಯಕ್ತಿಯು ಸಂಬಂಧಿಕರಾಗಿದ್ದಾರೆ. ಹುಡುಗಿಯೊಬ್ಬಳನ್ನು ಕೊಲೆಯಾದ ಮಲ್ಲ ಪ್ರೀತಿಸ್ತಿದ್ದ. ಆದರೆ ವಯಸ್ಸಿನ ಕಾರಣಕ್ಕೆ ಆತನಿಗೆ ಹುಡುಗಿಯನ್ನ ನೀಡಲು ವಿರೋಧವಿತ್ತು. 

ಆದಾಗ್ಯು ಮಲ್ಲ ಹುಡುಗಿಯನ್ನ ತನ್ನನ್ನು ಪ್ರೀತಿಸುವಂತೆ ಪೀಡಿಸ್ತಿದ್ದ. ಇದೆ ಕಾರಣಕ್ಕೆ ಆ ಹುಡುಗಿ ಆತ್ಮಹತ್ಯೆಮಾಡಿಕೊಂಡಿದ್ದಳು. ಸಹೋದರಿಯ ಸಾವಿನ ಹಿನ್ನೆಲೆಯಲ್ಲಿ ಸಹೋದರರು ಮಲ್ಲನನ್ನ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 


Post a Comment

Previous Post Next Post